ಮಂಗಳವಾರ, ಸೆಪ್ಟೆಂಬರ್ 9, 2014

ಎಂಥ ಗುರುವಿನ ಪಡೆದೆನವ್ವ

ಎಂಥ ಗುರುವಿನ  ಪಡೆದೆನವ್ವ 
ಶಾಂತ ರೂಪಿ ವಿರಕ್ತನವ್ವ ।

ತಾಳಿಕೋಟಿಯ ಭಾಗ್ಯದ ನಿಧಿಯು 
ಖಾಸಗತೇಶನ ಕಾರುಣ್ಯ ಶಿಶುವು ।।

ಅಂತರಂಗದ ಕಣ್ಣು ತೆರೆಸಿದ ಸಿದ್ಧನು 
ಅಂತಃ ಕರುಣದಿ ಜಗವ ಗೆದ್ದವನು ॥

ಶರಣರ ನುಡಿಗಳ ಅರಿತು ನಡೆದವನು 
ಭಕ್ತರ ಮನದಲಿ ಬೆರೆತು ಹೋದವನು ॥

ಮಾತಿನ ಮಾತಿಗೆ ನಿಲುಕದಂತವನು 
ಗೀತೆಯ ಪದಗಳ ಮೀರಿ ನಿಂತವನು ॥

ಆಡಂಬರವನು ಅರಿಯದಿದ್ದವನು
ಅಕಳಂಕ ಕಾರಿತಡಿ ಮಿಂದು ಎದ್ದವನು ॥

ಕಾಲವನೆ ಗೆದ್ದ ಮುಗ್ಧ ಮೂರುತಿಯು
ಲೀಲೆಯ ತೋರುತ ಹರಡಿ ಕೀರಿತಿಯು ॥

ಪಡೆದು ಅಕ್ಷರ ರೂಪ ಚಂದವಾದವನು 
ಕಡದಳ್ಳಿ ಚಂದ್ರಗೌಡಗೆ ವರವ ಕೊಟ್ಟವನು  || 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ