ಎಂಥ ಗುರುವಿನ ಪಡೆದೆನವ್ವ
ಶಾಂತ ರೂಪಿ ವಿರಕ್ತನವ್ವ ।
ತಾಳಿಕೋಟಿಯ ಭಾಗ್ಯದ ನಿಧಿಯು
ಖಾಸಗತೇಶನ ಕಾರುಣ್ಯ ಶಿಶುವು ।।
ಅಂತರಂಗದ ಕಣ್ಣು ತೆರೆಸಿದ ಸಿದ್ಧನು
ಅಂತಃ ಕರುಣದಿ ಜಗವ ಗೆದ್ದವನು ॥
ಶರಣರ ನುಡಿಗಳ ಅರಿತು ನಡೆದವನು
ಭಕ್ತರ ಮನದಲಿ ಬೆರೆತು ಹೋದವನು ॥
ಮಾತಿನ ಮಾತಿಗೆ ನಿಲುಕದಂತವನು
ಗೀತೆಯ ಪದಗಳ ಮೀರಿ ನಿಂತವನು ॥
ಆಡಂಬರವನು ಅರಿಯದಿದ್ದವನು
ಅಕಳಂಕ ಕಾರಿತಡಿ ಮಿಂದು ಎದ್ದವನು ॥
ಕಾಲವನೆ ಗೆದ್ದ ಮುಗ್ಧ ಮೂರುತಿಯು
ಲೀಲೆಯ ತೋರುತ ಹರಡಿ ಕೀರಿತಿಯು ॥
ಪಡೆದು ಅಕ್ಷರ ರೂಪ ಚಂದವಾದವನು
ಕಡದಳ್ಳಿ ಚಂದ್ರಗೌಡಗೆ ವರವ ಕೊಟ್ಟವನು ||
ಶಾಂತ ರೂಪಿ ವಿರಕ್ತನವ್ವ ।
ತಾಳಿಕೋಟಿಯ ಭಾಗ್ಯದ ನಿಧಿಯು
ಖಾಸಗತೇಶನ ಕಾರುಣ್ಯ ಶಿಶುವು ।।
ಅಂತರಂಗದ ಕಣ್ಣು ತೆರೆಸಿದ ಸಿದ್ಧನು
ಅಂತಃ ಕರುಣದಿ ಜಗವ ಗೆದ್ದವನು ॥
ಶರಣರ ನುಡಿಗಳ ಅರಿತು ನಡೆದವನು
ಭಕ್ತರ ಮನದಲಿ ಬೆರೆತು ಹೋದವನು ॥
ಮಾತಿನ ಮಾತಿಗೆ ನಿಲುಕದಂತವನು
ಗೀತೆಯ ಪದಗಳ ಮೀರಿ ನಿಂತವನು ॥
ಆಡಂಬರವನು ಅರಿಯದಿದ್ದವನು
ಅಕಳಂಕ ಕಾರಿತಡಿ ಮಿಂದು ಎದ್ದವನು ॥
ಕಾಲವನೆ ಗೆದ್ದ ಮುಗ್ಧ ಮೂರುತಿಯು
ಲೀಲೆಯ ತೋರುತ ಹರಡಿ ಕೀರಿತಿಯು ॥
ಪಡೆದು ಅಕ್ಷರ ರೂಪ ಚಂದವಾದವನು
ಕಡದಳ್ಳಿ ಚಂದ್ರಗೌಡಗೆ ವರವ ಕೊಟ್ಟವನು ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ